ಭಾನುವಾರ, ಅಕ್ಟೋಬರ್ 16, 2011

ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಕವನ ಸ್ಪಧರ್ೆ -2011 : ಬಸವರಾಜ ಹೃತ್ಸಾಕ್ಷಿ ಸಿರಿವಾರ, ಆರೀಫ್ ರಾಜಾಗೆ ಬಹುಮಾನ



ಸಹೃದಯ ಕವಿ ಬಸವರಾಜ ಹೃತ್ಸಾಕ್ಷಿ ಸಿರವಾರ ಅವರ
' ಒಬ್ಬ ಅವ್ವ ಇರಲಿ, ಈ ಬಿಸಿಲ ಕೂಸುಗಳಿಗೆ' ಕವನ ಈ ಬಾರಿಯ ಪ್ರತಿಷ್ಠಿತ ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಕವನ ಸ್ಪಧರ್ೆಯಲ್ಲಿ (2011) ಪ್ರಥಮ ಬಹುಮಾನ ಪಡೆದಿದೆ. ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಸಿರವಾರದಲ್ಲಿ ಬಸವರಾಜ ಹೃತ್ಸಾಕ್ಷಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನೂ ಎರಡನೇ ಬಹುಮಾನ ಆರೀಫ್ ರಾಜಾ ಅವರ " ಬುಖರ್ಾ ಹೌಸಿನ ಮುಂದೆ' ಕವನಕ್ಕೆ ದೊರೆತಿದೆ. ಈ ಬಾರಿ ಪ್ರಥಮ ಮತ್ತು ದ್ವಿತೀಯ ಬಹುಮಾನ ರಾಯಚೂರು ಜಿಲ್ಲೆಗೆ ದಕ್ಕಿರುವುದು ವಿಶೇಷ. ಈ ಹಿಂದೆಯೇ ಆರೀಫ್ ರಾಜಾ ಅವರ ಕವನ "ಜಂಗಮ ಪಕೀರನ ಜೋಳಿಗೆ'ಗೆ ಪ್ರಥಮ ಸ್ಥಾನ ದೊರೆತಿದ್ದನ್ನು ನಾವು ಸ್ಮರಿಸಬಹುದು.
ಕಾವ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗದೊಂದಿಗೆ ಜಿಲ್ಲೆಯ ಕೀತರ್ಿಯನ್ನು ಹೆಚ್ಚಿಸಿರುವ ಬಸವರಾಜ ಹೃತ್ಸಾಕ್ಷಿ ಸಿರವಾರ ಹಾಗೂ ಆರೀಫ್ ರಾಜಾ ಅವರಿಗೆ
ಹೃದಯಪೂರ್ವಕ ಅಭಿನಂದನೆಗಳು.
- ಪಿ.ಲಂಕೇಶ್ ಬಳಗ, ಸಿಂಧನೂರು (9880757380)

ಮಂಗಳವಾರ, ಅಕ್ಟೋಬರ್ 4, 2011



ಸಂಚಾಲಕ ಕೊಟ್ರೇಶ.ಬಿ.ಮಾತನಾಡುತ್ತಿರುವುದು.


ಲಂಕೇಶ್ ಮತ್ತೆ ಮತ್ತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಹಿತ್ಯಾಸಕ್ತರು ಹಾಗೂ ಲಂಕೇಶರ ಅಭಿಮಾನಿಗಳು.

ಕವಿ ನಾಗಣ್ಣ ಕಿಲಾರಿ ಮಾತನಾಡುತ್ತಿರುವುದು.

'ಲಂಕೇಶ್ ಮತ್ತೆ ಮತ್ತೆ' ಕಾರ್ಯಕ್ರಮದ ಭಾವ ಚಿತ್ರಗಳು...

ುಲ್ವರ್ಗ ವಿಶ್ವವಿದ್ಯಾಲಯಕ್ಕೆ ಬಿ.ಎಸ್.ಸಿ. ವಿಭಾಗದಲ್ಲಿ ಎರಡನೇ ರ್ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾಥರ್ಿ ಹುಸೇನ್ಭಾಷಾ ಅವರನ್ನು ಪಿ.ಲಂಕೇಶ್ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು.

ಲಂಕೇಶ್ರನ್ನು ಕನವರಿಸುತ್ತಾ...


ನೀಲು
ಮೊಟ್ಟೆ ಇಲ್ಲವಾಗಿ, ಮರಿ ಬೆಳೆದು
ಹಾಡಿ
ಎಲ್ಲೋ ಹಾರಿ ಹೋದ ಮೇಲೆ
ತೂಗಾಡುವ ಖಾಲಿ ಗೂಡಿನ
ದುಗುಡವ ಬಲ್ಲೆಯಾದರೆ
ಪ್ರೇಮವಿಲ್ಲದ ಎದೆಯ ಅರಿತಿರುವೆ
- ಪಿ.ಲಂಕೇಶ್

ಮಾಚರ್್ 6, 2011ರ ನಂತರ, ಲಂಕೇಶ್ರ ಕುರಿತು ಮತ್ತೊಂದು ಕಾರ್ಯಕ್ರಮ ಮಾಡುವ ಬಗ್ಗೆ ಗೆಳೆಯರೆಲ್ಲಾ ಚಚರ್ಿಸಿದೆವು. ಸೆಪ್ಟೆಂಬರ್ 25, 2011 ರಂದು ಭಾನುವಾರ ಕಾರ್ಯಕ್ರಮ ನಿಕ್ಕಿಯಾಯಿತು. ಈಗಾಗಲೇ ಮೊದಲು ಕಾಲೇಜ್ವೊಂದರಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲಂಕೇಶ್ ಅಭಿಮಾನಿಗಳು ಹಾಗೂ ಅವರ ಸಾಹಿತ್ಯದ ಬಗ್ಗೆ ಒಲವಿರುವ ಸಹೃದಯ ಮನಸ್ಸುಗಳನ್ನು ಕಂಡುಕೊಂಡಿದ್ದ ನಾವು ಇನ್ನೂ ಚೆನ್ನಾಗಿಯೇ ಕಾರ್ಯಕ್ರಮ ಆಯೋಜಿಸಬೇಕೆಂಬ ತುಡಿತದೊಂದಿಗೆ ಕಾರ್ಯಪ್ರವೃತ್ತರಾದೆವು. ನಮ್ಮ ಆಹ್ವಾನಕ್ಕೆ ಲಂಕೇಶ್ರ ಜೊತೆಗೆ ಹಲವು ವರ್ಷಗಳಿದ್ದು ಅವರ ಒಡನಾಟ ಬಲ್ಲ ಗಂಗಾಧರ ಕುಷ್ಟಗಿ ಕಾರ್ಯಕ್ರಮಕ್ಕೆ ಬರಲು ಒಪ್ಪಿದರು. ಜನಪರ ಕಾಳಜಿಯ ಕವಿಗಳಾದ ಪೀರಬಾಷಾ ಹಾಗೂ ಕಾವ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಸಹೃದಯ ಕವಿಗಳಾದ ಆರೀಫ್ ರಾಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಿ.ಲಂಕೇಶ್ ಬಳಗದ ಕಾರ್ಯಕ್ರಮಕ್ಕೆ ಬೆನ್ನುತಟ್ಟಿದ್ದಲ್ಲದೆ ಹೊಸ ಐಡಿಯಾಗಳನ್ನು ನೀಡುವ ಮೂಲಕ ಮತ್ತಷ್ಟು ನಮ್ಮನ್ನು ಉತ್ತೇಜಿಸಿದರು. ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಭಾಗವಹಿಸಿ ಶೋಭೆ ತಂದರು. ಕಾರ್ಯಕ್ರಮ ಮುಗಿದ ನಂತರ ಅನೇಕ ಯುವ ಮನಸ್ಸುಗಳು ಈ ಕಾರ್ಯಕ್ರಮದ ಮೂಲಕ ವೇದಿಕೆ ಕಲ್ಪಿಸಿದ್ದಕ್ಕೆ ಧನ್ಯವಾದ ಅಪರ್ಿಸಿದಾಗ. ನಮ್ಮ ಬಳಗ ಲಂಕೇಶ್ರನ್ನು ಕನವರಿಸುತ್ತಿರುವುದು ಸಾರ್ಥಕವೆನಿಸಿತು. ಕಾರ್ಯಕ್ರಮ ಆಯೋಜಿಸಲು ನಮಗೆಲ್ಲಾ ಮಾರ್ಗದರ್ಶಕರಾದ ಸಹೃದಯಿ ಕವಿಗಳಾದ ನಾಗಣ್ಣ ಕಿಲಾರಿ, ಡಿ.ಎಚ್.ಕಂಬಳಿ ಮತ್ತವರ ಪ್ರೋತ್ಸಾಹಕ್ಕೆ ಧನ್ಯವಾದ.
-ಬಸವರಾಜ ಹಳ್ಳಿ, ಹಸಮಕಲ್

ಕಾವ್ಯಕ್ಕೆ ನಿಘಂಟಿನ ಅವಶ್ಯಕತೆ ಇಲ್ಲ : ಆರೀಫ್ ರಾಜಾ

ಕವಿ ತನ್ನ ಸುತ್ತಮುತ್ತಲಿನ ಆಗುಹೋಗುಗಳಿಗೆ ಫೀಲ್ ಮಾಡುವ ಗುಣ ಹೊಂದಿರಬೇಕು ಹೊರತು; ಆತನಿಗೆ ನಿಘಂಟಿನ ಅವಶ್ಯಕತೆ ಇಲ್ಲ ಎಂದು ಕವಿ ಆರೀಪ್ ರಾಜಾ ಅಭಿಪ್ರಾಯಪಟ್ಟರು. ಅವರು ದಿನಾಂಕ 25-9-2011ರಂದು ಭಾನುವಾರ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಪಿ.ಲಂಕೇಶ ಬಳಗದಿಂದ ಏರ್ಪಡಿಸಿದ್ದ ಲಂಕೇಶ್ ಮತ್ತೆ ಮತ್ತೆ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಪಿ.ಲಂಕೇಶ್ ಲೇಖಕರ ಲೇಖಕರಾಗಿದ್ದರು. ಲಂಕೇಶರ ಟೀಕೆ ಟಿಪ್ಪಣಿಗಳು ಸಾಂಸ್ಕೃತಿಕ ಪಠ್ಯಗಳಾಗಿದ್ದವು. ಇಂದಿನ ಬಹುತೇಕ ಪತ್ರಿಕೆಗಳ ಅಂಕಣಕಾರರಲ್ಲಿ ಲಂಕೇಶರ ಸಾಹಿತ್ಯದ ಪ್ರಭಾವವನ್ನು ಕಾಣಬಹುದಾಗಿದೆ ಎಂದು ಅವರು ವಿಶ್ಲೇಷಿಸಿದರು. ಬಂಡಾಯ ಕವಿ ಪೀರ್ಬಾಷಾ ಅವರು ಮಾತನಾಡಿ, ಲಂಕೇಶರು ಕನರ್ಾಟಕದಲ್ಲಿ ಕಾಂಗ್ರೆಸ್ಸೇತರ ಸಕರ್ಾರವನ್ನು ಹುಟ್ಟು ಹಾಕುವಲ್ಲಿ ತಮ್ಮ ಪತ್ರಿಕೆಯನ್ನು ಅಸ್ತ್ರವಾಗಿ ಬಳಸಿದರು. ಅವರ ಆಶಯದಂತೆ ಕನರ್ಾಟಕದಲ್ಲಿ ಕಾಂಗ್ರೆಸ್ ಅಧಿಕಾರದಿಂದ ವಂಚಿತಗೊಂಡು ಜನತಾಪಕ್ಷ ಅಧಿಕಾರಕ್ಕೆ ಬಂದಿತು. ಆದರೆ ಜನತಾ ಪಕ್ಷ ಲಂಕೇಶರ ನಿರೀಕ್ಷೆಯಂತೆ ಸಾಮಾಜಿಕ ಕಳಕಳಿಯುಳ್ಳ ಪಕ್ಷವಾಗಿ ಕೆಲಸ ಮಾಡಲಿಲ್ಲ. ಅಂತಹ ಸಂದರ್ಭದಲ್ಲಿ ಲಂಕೇಶರು ತಮ್ಮ ಮೊನಚು ಬರಹದ ಮೂಲಕ ಟೀಕಿಸಿದರು ಎಂದರು. ಮುಂದುವರೆದು ಮಾತನಾಡಿದ ಅವರು, ಲಂಕೇಶ ಜ್ಞಾನಪೀಠ ಪ್ರಶಸ್ತಿಗೂ ಅರ್ಹರಾಗಿದ್ದರು. ಆದರೆ ಪ್ರಶಸ್ತಿ ಅವರಿಗೆ ದೊರೆಯಲಿಲ್ಲ. ಯಾವುದೇ ಪ್ರಶಸ್ತಿಗಳು ಪ್ರತಿಭೆಗೆ ಮಾನದಂಡವಾಗಲಾರವು. ಅವರು ಕನ್ನಡ ಸಾಹಿತ್ಯದಲ್ಲಿ ಗದ್ಯದ ಪ್ರಾಕಾರವನ್ನು ಬೆಳೆಸಿದ ಶ್ರೇಷ್ಠ ಸಾಹಿತಿಗಳಾಗಿದ್ದಾರೆ ಎಂದು ಬಣ್ಣಿಸಿದರು. ಕತೆಗಾರ ಕಲಿಗಣನಾಥ ಗುಡದೂರು ಮಾತನಾಡಿ ಯುವ ಕವಿಗಳು ಅಧ್ಯಯನಶೀಲರಾಗಿ ಕಾವ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳಿಗೆ ತೆರದುಕೊಳ್ಳಬೇಕು ಎಂದು ಸಲಹೆ ನೀಡಿದರು. ಸುಮಾರು ಹತ್ತಕ್ಕೂ ಹೆಚ್ಚು ಯುವ ಕವಿಗಳು ಕವನಗಳನ್ನು ವಾಚಿಸಿದರು. ನಿವೃತ್ತ ಶಿಕ್ಷಕ ಕೃಷ್ಣಮೂತರ್ಿರಾವ್ ಅವರ ಕವನ, ಮಹಾಂತೇಶಸ್ವಾಮಿ ಮಲ್ಲದಗುಡ್ಡ ಅವರ ಎಷ್ಟೊ ತ್ತು ಎಂಬ ಕವನ ನೆರೆದ ಸಾಹಿತ್ಯಾಸಕ್ತರ ಗಮನ ಸೆಳೆದವು. ಉಳಿದಂತೆ ಗಿರೀಶ, ಅಂಬಮ್ಮ, ಅಮರೇಶ ಗಿಣಿವಾರ, ಸತೀಶ ನವಲಿ, ನಾಗರಾಜ ಮತ್ತಿತರರು ಕವನಗಳನ್ನು ವಾಚಿಸಿದರು. ಉಪನ್ಯಾಸಕ ಹುಡಸಪ್ಪ ಹುಡಸೂರು ಲಂಕೇಶರ ಅವ್ವ ಕವನವನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಲಂಕೇಶ್ ಕಾವ್ಯ ಸ್ಪಧರ್ೆಯಲ್ಲಿ ಬಹುಮಾನ ಪಡೆದ ರಾಘವೇಂದ್ರ, ಅಂಮರೇಶ ತುವರ್ಿಹಾಳ, ಸುವರ್ಣ ಸಿರವಾರ ಅವರಿಗೆ ಲಂಕೇಶ ಬಳಗದಿಂದ ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಲಾಯಿತು. ಪ್ರಹ್ಲಾದ್ ಗುಡಿ ವಕೀಲರು ಉಪಸ್ಥಿತರಿದ್ದರು. ಪತ್ರಕರ್ತ ಡಿ.ಎಚ್.ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಬಾದಲರ್ಿ ಸ್ವಾಗತಿಸಿದರು. ಕವಿ ನಾಗಣ್ಣ ಕಿಲಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ರಾಮಣ್ಣ ಹಿರೇಬೇರ್ಗಿ, ಬಿ.ಕೊಟ್ರೇಶ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕರಾದ ಬಸವರಾಜ ಹಳ್ಳಿ, ಹಸಮಕಲ್ ವಂದಿಸಿದರು.

ಲಂಕೇಶ್ ಪತ್ರಿಕೋದ್ಯಮಕ್ಕೆ ಸರ್ವಸ್ವ ಅಪರ್ಿಸಿಕೊಂಡಿದ್ದರು : ಗಂಗಾಧರ ಕುಷ್ಟಗಿ


ಪಿ.ಲಂಕೇಶ್ ಓರ್ವ ವ್ಯಕ್ತಿಯಾಗಿರದೆ ಶಕ್ತಿಯಾಗಿದ್ದರು. ಮೇಷ್ಟ್ರು ನೌಕರಿಯನ್ನು ಬಿಟ್ಟು ಪತ್ರಿಕೋದ್ಯಮಕ್ಕಾಗಿಯೇ ಸರ್ವಸ್ವವನ್ನು ಅಪರ್ಿಸಿಕೊಂಡಿದ್ದರು. ಅವರು ಕನ್ನಡಕ್ಕೆ ಶೂದ್ರತ್ವದ ದೀಕ್ಷೆ ನೀಡಿದವರು ಎಂದು ಪತ್ರಕರ್ತ ಗಂಗಾಧರ ಕುಷ್ಟಗಿ ಅಭಿಪ್ರಾಯಪಟ್ಟರು. ಅವರು ದಿನಾಂಕ 25-9-2011ರಂದು ಭಾನುವಾರ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಪಿ.ಲಂಕೇಶ್ ಬಳಗದಿಂದ ಏರ್ಪಡಿಸಿದ್ದ ಲಂಕೇಶ್ ಮತ್ತೆ ಮತ್ತೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಲಂಕೇಶರ ವೈಚಾರಿಕ ದೃಷ್ಟಿಕೋನ ಅವರನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿತ್ತು. ಕುವೆಂಪು ಅವರ ನಂತರ ಗದ್ಯ ಸಾಹಿತ್ಯಕ್ಕೆ ಹೊಸ ಕಸವು ನೀಡಿದವರು ಲಂಕೇಶರು. ಲಂಕೇಶರಂತೆ ತೇಜಸ್ವಿ ಕೂಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಠಿಸಿದವರು.ಈ ಹಿನ್ನೆಲೆಯಲ್ಲಿ ಸಿಂಧನೂರಿನಲ್ಲಿ ಹುಟ್ಟಿರುವ ಲಂಕೇಶ ಬಳಗ ಪ್ರಜಾಸತ್ತಾತ್ಮಕ ಮನಸ್ಸುಗಳುಳ್ಳ ಸಂಘಟನೆಯಾಗಿದೆ. ಜ್ವಲಂತ ಸಮಸ್ಯೆಗಳ ಬಗ್ಗೆಯೂ ಈ ಸಂಘಟನೆ ಚಿಂತನೆ ಮಾಡುವುದು ಅಗತ್ಯವಾಗಿದೆ ಎಂದರು. ಲಂಕೇಶ್ರ ಅವ್ವ ಕವನ ಅತ್ಯಂತ ಜನಪ್ರೀಯತೆ ಪಡೆಯಿತಲ್ಲದೆ, ಬಿ.ಬಿ.ಸಿ.ಚಾನೆಲ್ನಲ್ಲಿ ಪ್ರಪಂಚದಾದ್ಯಂತ ಪ್ರಸಾರವಾಗಿ ದಾಖಲೆ ನಿಮರ್ಿಸಿತು. ಹೊಸ ಹೊಸ ಪ್ರಯೋಗಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದ್ದು ಎಂದು ಹೇಳಿದರು. ಸಂವಿಧಾನದ ಆಶಯಗಳನ್ನೇ ಕೋಮುವಾದಿಗಳು ಬುಡಮೇಲು ಮಾಡುತ್ತಿದ್ದಾರೆ. ಹೈ.ಕ.ಭಾಗದಲ್ಲಿ ಇನ್ನೂ ಪ್ಯೂಡಲಿಸಂನ ಬೇರುಗಳಿವೆ ಎಂದು ವಿಷಾದಿಸಿದರು. ಈ ಭಾಗದ ಸಾಹಿತ್ಯ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮುಂದಿದೆ. ಯುವಕವಿ ಆರಿಫ್ರಾಜಾ, ಕಥೆಗಾರ ಕಲಿಗಣನಾಥ ಗುಡದೂರು ಸೇರಿದಂತೆ ಅನೇಕ ಸಾಹಿತಿಗಳು ಹೊರಹೊಮ್ಮುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಾವು 1990ರ ದಶಕದಲ್ಲಿ ಸಿಂಧನೂರಿನಲ್ಲಿ ಕಟ್ಟಿದ ಚಳವಳಿಗಳ ಬಗ್ಗೆ ಮೆಲುಕು ಹಾಕಿದ ಅವರು, ಆ ಸಂದರ್ಭದಲ್ಲಿ ಗದ್ರಟಗಿ ಅಮರೇಗೌಡರ ಮಾರ್ಗದರ್ಶನದಲ್ಲಿ ಬಿ.ಲಿಂಗಪ್ಪ, ಬಸವರಾಜ, ವೆಂಕನಗೌಡ ಗದ್ರಟಗಿ ಮುಂತಾದ ಗೆಳೆಯರ ಬಳಗ ಅಂದಿನ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ್ದು ಸಣ್ಣ ಮಾತಲ್ಲ. ಆಗಲೂ ಸಹ ಕೋಮುವಾದಿ ಸಂಘಟನೆಗಳು ಹಾಗೂ ತಮ್ಮ ಮಧ್ಯೆ ಸಂಘರ್ಷಗಳು, ವೈಚಾರಿಕ ಭಿನ್ನತೆಗಳು, ಚಚರ್ೆಗಳು ನಡೆಯುತ್ತಿದ್ದವು ಎಂದು ಸ್ಮರಿಸಿದರು.

ಬುಧವಾರ, ಮಾರ್ಚ್ 16, 2011

ಕವಿಗೋಷ್ಠಿಯಲ್ಲಿ ನಾನು ಕವಿತೆ ಓದಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಲಂಕೇಶ್ ಬಳಗ
ಕವಿಗೋಷ್ಠಿ ಹಾಗೂ ಲಂಕೇಶ್ ನೆನಪು ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮದಲ್ಲಿ ಗೆಳೆಯ ಕೊಟ್ರೇಶ.ಬಿ.

ಲಂಕೇಶ್ ದಿಟ್ಟ ಹೋರಾಟಗಾರ : ಕವಿ ನಾಗಣ್ಣ ಕಿಲಾರಿ ಬಣ್ಣನೆ

ನೈತಿಕ ಎಚ್ಚರಿಕೆಯೊಂದಿಗೆ ಅತ್ಯಂತ ಕ್ರಿಯಾಶೀಲವಾಗಿ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕೃಷಿ ಮಾಡಿದ ಪಿ.ಲಂಕೇಶ ದಿಟ್ಟ ಹೋರಾಟಗಾರ ಎಂದು ಕವಿ ನಾಗಣ್ಣ ಕಿಲಾರಿ ಅಭಿಪ್ರಾಯ ಪಟ್ಟರು. ಅವರು ನಗರದ ಅನಿಕೇತನ ಕಾಲೇಜಿನಲ್ಲಿ ಲಂಕೇಶ್ರ 76ನೇ ಜನ್ಮ ದಿನಾಚರಣೆ ಅಂಗವಾಗಿ ಲಂಕೇಶ್ ಬಳಗದಿಂದ ಭಾನುವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಕವಿಗೋಷ್ಠಿ ಹಾಗೂ ಲಂಕೇಶ್ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು. ಲಂಕೇಶ್ ಹೋರಾಟಗಾರರಾಗಿ, ವಿರೋಧ ಪಕ್ಷವಾಗಿ, ಸಂಘಟನೆಯಂತೆ ಕೆಲಸ ಮಾಡಿದರು. ಸಾಹಿತ್ಯ ಮತ್ತು ಪತ್ರಿಕೋದ್ಯಮದ ಮೂಲಕ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆದ ಪರಿ ಎಲ್ಲರನ್ನು ಬೆರಗುಗೊಳಿಸುವಂತದ್ದು ಎಂದು ಹೇಳಿದರು. ಉಪನ್ಯಾಸಕ ವೃತ್ತಿಯಿಂದ ಪತ್ರಿಕಾ ರಂಗಕ್ಕೆ ಬಂದಿದ್ದ ಲಂಕೇಶ್ರು ಇಂಗ್ಲೀಷ್ ಸಾಹಿತ್ಯದ ಆಳ ಅಧ್ಯಯನ ಹೊಂದಿದ್ದರು. ಚಾಲ್ಸರ್್ ಬೋದಿಲೇರ್ನಂತರ ಅಪ್ರತಿಮ ಲೇಖಕರ ಸಂಕಲನಗಳನ್ನು ಬೆಚ್ಚಿಬೀಳಿಸುವ ರೀತಿಯಲ್ಲಿ ಅನುವಾದ ಮಾಡಿದ ಕೀತರ್ಿ ಲಂಕೇಶ್ರಿಗೆ ಸಲ್ಲುತ್ತದೆ ಎಂದರು. ಕಥೆ, ಕಾದಂಬರಿ, ನೀಲು ಪದ್ಯ, ಟೀಕೆ ಟಿಪ್ಪಣೆ, ಅನುವಾದದ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದ ಲಂಕೇಶ್ರು ಯುವ ಸಾಹಿತಿಗಳನ್ನು ರೂಪಿಸಿದರು. ಚಲನ ಶೀಲತೆಗೆ ಹೆಸರಾಗಿದ್ದ ಲಂಕೇಶ್ ಕೊನೆಯುಸಿರೆಳೆಯುವ ಮದ್ಯರಾತ್ರಿ ನೀಲು ಪದ್ಯವನ್ನು ಬರೆದು ಪುಸ್ತಕ ಓದುತ್ತಲೇ ಚಿರನಿದ್ರೆಗೆ ಜಾರಿದ್ದರು. ಇದನ್ನು ಗಮನಿಸಿದರೆ ಅವರಲ್ಲಿನ ಓದುಗ ಎಷ್ಟು ಕ್ರೀಯಾಶೀಲ ಮತ್ತು ಓದಿನ ಬಗ್ಗೆ ಅವರಲ್ಲಿನ ದಾಹ ಎಂತಹದ್ದು ಎಂದು ಗೊತ್ತಾಗುತ್ತದೆ. ಅವರಂತಹ ದಿಟ್ಟ, ಸಾಹಸಿ ಪತ್ರಕರ್ತ ಸಿಗುವುದು ತುಂಬಾ ವಿರಳ ಎಂದು ಹೇಳಿದರು. ಅನಿಕೇತನ ಕಾಲೇಜಿನ ಪ್ರಾಚಾರ್ಯ ಬಸವರಾಜ ಯಲಬುಗರ್ಿ ಮಾತನಾಡಿ ಎಪ್ಪತ್ತರ ದಶಕದಿಂದಲೂ ಲಂಕೇಶ್ರು ಪತ್ರಿಕಾ ರಂಗದಲ್ಲಿ ಮಾಡಿದ ಕ್ರಾಂತಿ ಅಷ್ಟಿಷ್ಟಲ್ಲ. ವಿರೋಧ ಪಕ್ಷಕ್ಕಿಂತಲೂ ಲಂಕೇಶ್ರ ಬಗ್ಗೆಯೇ ಹೆಚ್ಚಿನ ಭಯವನ್ನು ಅಂದಿನ ಸಕರ್ಾರಗಳು ಹೊಂದಿದ್ದವು. ಇದನ್ನು ಗಮನಿಸಿದರೆ ಲಂಕೇಶ್ರಲ್ಲಿ ಎಂತಹ ಶಕ್ತಿ ಅಡಗಿತ್ತು ಎನ್ನುವುದು ಅರ್ಥವಾಗುತ್ತದೆ ಎಂದು ಹೇಳಿದರು. ಪ್ರೌಢಶಾಲಾ ಶಿಕ್ಷಕ ಬೀರಪ್ಪ ಶಂಭೋಜಿ ಮಾತನಾಡಿ ಲಂಕೇಶ್ರಿಗೆ ಲಂಕೇಶರೇ ಸಾಟಿ. ಅವರ ಜನ್ಮ ದಿನಾಚರಣೆಯನ್ನು ಸಿಂಧನೂರಿನಂತಹ ನಗರದಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿ ಲಂಕೇಶ್ರ ಕುರಿತು ರಚಿಸಿದ ಚುಟುಕುಗಳನ್ನು ವಾಚಿಸಿದರು. ಕಾಮರ್ಿಕ ಮುಖಂಡ ವೆಂಕನಗೌಡ ಗದ್ರಟಗಿ ಮಾತನಾಡಿ ಎಂಬತ್ತರ ದಶಕದಲ್ಲಿ ಲಂಕೇಶ್ ಪತ್ರಿಕೆಯದೇ ಸುದ್ದಿ. ಜನಸಾಮಾನ್ಯರಿಂದಿಡಿದು ರಾಜಕಾರಣಿಗಳು ಲಂಕೇಶ್ ಪತ್ರಿಕೆಯಲ್ಲಿ ಈ ಭಾರಿ ಯಾರದು ಗದ್ದಲ ಎನ್ನುವಂತೆ ನೋಡುತ್ತಿದ್ದರು. ಭ್ರಷ್ಟ ವ್ಯವಸ್ಥೆಯ ಹಾಗೂ ರಾಜಕಾರಣಿ ಮತ್ತು ಅಧಿಕಾರಿಗಳ ವಿರುದ್ದ ಸಮರ ಸಾರಿದ್ದ ಲಂಕೇಶ್ ಲೇಖನಿಯನ್ನು ಖಡ್ಗವಾಗಿ ಬಳಸಿದರು ಎಂದು ಹೇಳಿದರು. ಕೊಟ್ರೇಶ.ಬಿ., ರಾಮಣ್ಣ ಹಿರೇಭೇರಗಿ, ಖಲೀಲ್, ಚಂದ್ರಶೇಖರ ಬೆನ್ನೂರು, ಬಸವರಾಜ ಹಳ್ಳಿ ಹಸಮಕಲ್, ಹನುಮಂತಪ್ಪ ಗೂಳಿ, ಶಿವನಗೌಡ, ಷರೀಫ್ ಹಸಮಕಲ್, ಕೊಟ್ರೇಶ.ವೈ.ಎಂ ಮತ್ತಿತರರು ಕವನ ವಾಚಿಸಿದರು. ರಾಮಣ್ಣ ಹಿರೇಬೇರಿಗಿ ಕವಿಗಳ ಕವನ ಕುರಿತು ಮಾತನಾಡಿದರು. ಲಂಕೇಶ್ ಭಾವಚಿತ್ರಕ್ಕೆ ಹೂವಿನ ಮಾಲೆ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕೊಟ್ರೇಶ.ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಸೇನಬಾಷಾ ನಿರೂಪಿಸಿದರು. ಬಸವರಾಜ ಬಾದಲರ್ಿ ವಂದಿಸಿದರು. ಉಪನ್ಯಾಸಕರಾದ ಹುಡಸಪ್ಪ ಹುಡಸೂರು, ಕಾಳಿಂಗರೆಡ್ಡಿ, ನಾರಾಯಣ ಬೆಳಗುಕರ್ಿ, ವೀರೇಶ ನಾಯಕ, ಹುಸೇನಪ್ಪ ಅಮರಾಪುರ, ಎಂ.ಭಾಸ್ಕರ್, ಇಮಾಮ್ ಹುಸೇನ್ ಎತ್ಮಾರಿ ಮತ್ತಿತರರು ಇದ್ದರು.
- ಬಸವರಾಜ ಹಳ್ಳಿ , ಹಸಮಕಲ್

ಹೀಗೆ ಹುಟ್ಟಿತು ಲಂಕೇಶ್ ಬಳಗ

ಸಿಂಧನೂರಿನಂತಹ ನಗರದಲ್ಲಿ ಸಾಹಿತ್ಯಿಕ ವಾತಾವರಣ ಸೃಷ್ಟಿ ಮಾಡಬೇಕೆನ್ನುವುದು ನನ್ನ ಬಹು ದಿನದ ಕನಸು. ಹಲವು ಬಾರಿ ಇದಕ್ಕೆ ವಿಫಲ ಯತ್ನ ನಡೆಸಿ ಸುಮ್ಮನಾಗಿದ್ದುಂಟು. ಮಾಚರ್್ 2ರಂದು ಹೊಟೇಲ್ವೊಂದರಲ್ಲಿ ಟೀ ಹೀರುತ್ತಾ ಕುಳಿತಿದ್ದ ಸಂದರ್ಭದಲ್ಲಿ ವೃತ್ತಿಯಲ್ಲಿ ಶಿಕ್ಷಕರಾಗಿರುವ ಗೆಳೆಯ ಕೊಟ್ರೇಶ.ಬಿ. ಕವಿಗೋಷ್ಠಿ ಬಗ್ಗೆ ಮಾತೆತ್ತಿದರು. ಹಾಗೆ ಹೀಗೆ ಮಾತನಾಡುತ್ತಾ ಏನಾದರೂ ಆಗಲಿ ಈ ಬಾರಿ ಕವಿಗೋಷ್ಠಿ ನಡಿಸಿಯೇ ಬಿಡೋಣ ಎನ್ನುವ ತೀಮರ್ಾನಕ್ಕೆ ಇಬ್ಬರು ಬಂದೆವು. ಆವಾಗ ನಮ್ಮಲ್ಲಿ ಉದಯಿಸಿದ್ದೇ ಲಂಕೇಶ್ ಬಳಗ. ಲಂಕೇಶ್ರ ಕುರಿತು ಆಳ ಅಧ್ಯಯನವಿರುವ ಸಿಂಧನೂರಿನ ಸಕರ್ಾರಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಹಾಗೂ ಸಹೃದಯ ಕವಿ ನಾಗಣ್ಣ ಕಿಲಾರಿಯವರನ್ನು ದೂರವಾಣಿಯಲ್ಲಿ ಸಂಪಕರ್ಿಸಿ ವಿಷಯ ತಿಳಿಸಿದಾಗ ಅವರು ಲಂಕೇಶ್ರ ಕುರಿತು ಮಾತನಾಡಲು ಒಪ್ಪಿಕೊಂಡರು. ನಮಗೆ ಮತ್ತಷ್ಟು ಧೈರ್ಯ ಬಂತು. ಪತ್ರಿಕೆಗಳಲ್ಲಿ ಲಂಕೇಶ್ ಬಳಗದಿಂದ ಮಾ.6ರಂದು ಅನಿಕೇತನ ಕಾಲೇಜಿನಲ್ಲಿ ಕವಿಗೋಷ್ಠಿ ಹಾಗೂ ಲಂಕೇಶ್ರ 76 ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದೆವು. ಆವತ್ತು ಭಾರತ ಮತ್ತು ಐರ್ಲಂಡ್ ಕ್ರಿಕೆಟ್ ಪಂದ್ಯ ಹಾಗೂ ಪತ್ರಕರ್ತರೊಬ್ಬರ ವಿವಾಹ ಕಾರ್ಯಕ್ರಮದಿಂದ ಕವಿಗೋಷ್ಠಿ ಸಮಯವನ್ನು ಬೆಳಿಗ್ಗೆ 10 ಗಂಟೆಗೆ ಬದಲಾಯಿಸಲಾಯಿತು.
ಮಾಚರ್್ 5ರ ಶನಿವಾರ ಸಾಯಂಕಾಲದಿಂದ ಲಂಕೇಶ್ ಸಾಹಿತ್ಯಾಭಿಮಾನಿಗಳಿಗೆ, ಆಪ್ತರಿಗೆ ಕಾರ್ಯಕ್ರಮಕ್ಕೆ ಬರುವಂತೆ ಕೋರಿ ನಂತರ ರಾತ್ರಿ 9 ಗಂಟೆಗೆ ಲಂಕೇಶ್ ಬಳಗದ ಬ್ಯಾನರ್ ಹಾಕಿಸಲು ಗೆಳೆಯ ಇಮಾಮ್ ಹುಸೇನ್ಗೆ ಹೇಳಿ, ನಾಗಣ್ಣ ಕಿಲಾರಿ ಅವರ ರೂಂಗೆ ಕಾರ್ಯಕ್ರಮದ ರೂಪುರೇಷೆ ಕುರಿತು ಚಚರ್ಿಸಲು ನಾನು ಕೊಟ್ರೇಶ.ಬಿ, ಸಹೋದರರಾದ ಖಲೀಲ್, ಹುಸೇನ್ ಹೋದೆವು. ರಾತ್ರಿ 11 ಗಂಟೆಯವರೆಗೂ ಕಾರ್ಯಕ್ರಮದ ಬಗ್ಗೆ ಚಚರ್ಿಸಿ ಬಂದೆವು. ಆ ನಂತರ ಕೋಟ್ರೇಶ.ಬಿ. ನಾನು ಮೂರ್ನಾಲ್ಕು ದಿನದಲ್ಲೇ ಕಾರ್ಯಕ್ರಮ ನಡೆಸಲು ಮುಂದಾಗಿದ್ದೇವೆ ಹೇಗಾಗುತ್ತೋ ಏನೋ ಎಂದು ಆತಂಕದಿಂದ ಚಚರ್ಿಸಿದೆವಾದರೂ, ಬಂದಷ್ಟು ಗೆಳೆಯರು ಬರಲಿ ಎಂದು ಸುಮ್ಮನಾದೆವು. ಬೆಳಿಗ್ಗೆ 9 ಗಂಟೆಗೆ ಅನಿಕೇತನ ಕಾಲೇಜಿನ ತರಗತಿ ಕೊಠಡಿಯಲ್ಲಿ ಬ್ಯಾನರ್ ಕಟ್ಟಿ ಎಲ್ಲ ಅಣಿಗೊಳಿಸಿದೆವು. ನಾಗಣ್ಣ ಕಿಲಾರಿಯವರು ಬಂದರು. ಅಷ್ಟರಲ್ಲಿ ಚುಸಾಪ ಜಿಲ್ಲಾಧ್ಯಕ್ಷ ಬೀರಪ್ಪ ಶಂಭೋಜಿ, ಕಾಮರ್ಿಕ ಮುಖಂಡ ವೆಂಕನಗೌಡ ಗದ್ರಟಗಿ ಅವರು ಬಂದಿದ್ದರು. 10 ಗಂಟೆ ಮೀರುತ್ತಾ ಬಂದರೂ ಏಳೆಂಟು ಜನರು ಮಾತ್ರ ಇದ್ದೆವು. ಇದರಿಂದ ಕಾರ್ಯಕ್ರಮ ಹೇಗಾಗುತ್ತೋ ಎಂದು ಆತಂಕಗೊಂಡಿದ್ದೆವು. ಆನಂತರ ಬಿ.ಸಿ.ಎಂ.ಹಾಸ್ಟೆಲ್ನ ವಿದ್ಯಾಥರ್ಿಗಳು, ವಿದ್ಯಾಥರ್ಿನಿಯರು ಸೇರಿದಂತೆ ಶಿಕ್ಷಕ ಬಳಗ ನಮ್ಮ ಮಿತ್ರರು ಬಂದರು. ಖಾಲಿ ಖಾಲಿ ಹೊಡೆಯುತ್ತಿದ್ದ ಕೊಠಡಿಯಲ್ಲಿ ಕೊನೆಗೆ ಕೂಡಲು ಜಾಗವಿಲ್ಲದೆ ಕೆಲವರು ಹೊರಗಡೆ ನಿಲ್ಲುವಂತಾಯಿತು. ಆವಾಗ ಲಂಕೇಶ್ ಬಳಗ ಎಷ್ದು ದೊಡ್ಡದಿದೆ ಎಂದು ತಿಳಿಯಿತು. ಕಾರ್ಯಕ್ರಮ ಮುಗಿದ ನಂತರ ಟಿ ಬಿಸ್ಕಿಟ್ಗೆ ವ್ಯವಸ್ಥೆ ಮಾಡಿದ್ದೆವು. ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರೂ ಲಂಕೇಶ್ ಬಳಗದ ಕವಿಗೋಷ್ಠಿ ಮೂಲಕ ತಮ್ಮ ಬಹು ದಿನದ ಕವಿತೆ ಓದುವ ಕನಸನ್ನು ಈಡೇರಿಸಿದ್ದಕ್ಕೆ ಧನ್ಯವಾದ ಹೇಳಿದರು. ಅವರು ಧನ್ಯವಾದ ಹೇಳುತ್ತಿದ್ದಂತೆ ನಮ್ಮಲ್ಲಿ ಲಂಕೇಶ್ ಆಳವಾಗಿ ಬೇರೂರಿದರು.
ಲಂಕೇಶ್ ಬಳಗ ಜನ್ಮ ತಳೆಯಲು ಗೆಳೆಯರಾದ ಇಮಾಮ್ ಹುಸೇನ್ ಎತ್ಮಾರಿ, ಕೊಟ್ರೇಶ.ಬಿ, ಸಹೋದರರಾದ ಖಲೀಲ್, ಹುಸೇನಬಾಷಾ, ಉಪನ್ಯಾಸಕರಾದ ಡಿ.ಎಚ್.ಕಂಬಳಿ, ನಾಗಣ್ಣ ಕಿಲಾರಿ, ಯಮನಪ್ಪ ಪವಾರ್ ಅವರ ಸಹಕಾರ ಸ್ಮರಣೀಯ.
- ಬಸವರಾಜ ಹಳ್ಳಿ, ಹಸಮಕಲ್

ಮಂಗಳವಾರ, ಮಾರ್ಚ್ 15, 2011

ಕಗ್ಗಾಡಿನ ಬೇಡರ ಮೋನಿ
ತೀರಿಕೊಂಡಾಗ
ಪತ್ರಿಕೆಗಳ ವಿಷಾದಕ್ಕೆ ಬದಲು
ಸೇವಂತಿ ದುಃಖದಿಂದ ದಳ ಉದುರಿಸಿತು.


ಮೋಕ್ಷವೆಂದರೆ ಎಲ್ಲ ಸುಖ ದುಃಖಗಳಿಂದ ಬಿಡುಗಡೆಎಂದು
ಪಂಡಿತರು ಹೇಳಿದ್ದು ಕೇಳಿದೊಡನೆ
ಮೋಕ್ಷದಿಂದ ತಪ್ಪಿಸಿಕೊಳ್ಳಲು
ಆತ ಪಾಪಗಳನ್ನು ಮಾಡಲು ಓಡಿದ - ಪಿ.ಲಂಕೇಶ್