ಬುಧವಾರ, ಮಾರ್ಚ್ 16, 2011

ಕವಿಗೋಷ್ಠಿಯಲ್ಲಿ ನಾನು ಕವಿತೆ ಓದಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಲಂಕೇಶ್ ಬಳಗ
ಕವಿಗೋಷ್ಠಿ ಹಾಗೂ ಲಂಕೇಶ್ ನೆನಪು ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮದಲ್ಲಿ ಗೆಳೆಯ ಕೊಟ್ರೇಶ.ಬಿ.

ಲಂಕೇಶ್ ದಿಟ್ಟ ಹೋರಾಟಗಾರ : ಕವಿ ನಾಗಣ್ಣ ಕಿಲಾರಿ ಬಣ್ಣನೆ

ನೈತಿಕ ಎಚ್ಚರಿಕೆಯೊಂದಿಗೆ ಅತ್ಯಂತ ಕ್ರಿಯಾಶೀಲವಾಗಿ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕೃಷಿ ಮಾಡಿದ ಪಿ.ಲಂಕೇಶ ದಿಟ್ಟ ಹೋರಾಟಗಾರ ಎಂದು ಕವಿ ನಾಗಣ್ಣ ಕಿಲಾರಿ ಅಭಿಪ್ರಾಯ ಪಟ್ಟರು. ಅವರು ನಗರದ ಅನಿಕೇತನ ಕಾಲೇಜಿನಲ್ಲಿ ಲಂಕೇಶ್ರ 76ನೇ ಜನ್ಮ ದಿನಾಚರಣೆ ಅಂಗವಾಗಿ ಲಂಕೇಶ್ ಬಳಗದಿಂದ ಭಾನುವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಕವಿಗೋಷ್ಠಿ ಹಾಗೂ ಲಂಕೇಶ್ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು. ಲಂಕೇಶ್ ಹೋರಾಟಗಾರರಾಗಿ, ವಿರೋಧ ಪಕ್ಷವಾಗಿ, ಸಂಘಟನೆಯಂತೆ ಕೆಲಸ ಮಾಡಿದರು. ಸಾಹಿತ್ಯ ಮತ್ತು ಪತ್ರಿಕೋದ್ಯಮದ ಮೂಲಕ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆದ ಪರಿ ಎಲ್ಲರನ್ನು ಬೆರಗುಗೊಳಿಸುವಂತದ್ದು ಎಂದು ಹೇಳಿದರು. ಉಪನ್ಯಾಸಕ ವೃತ್ತಿಯಿಂದ ಪತ್ರಿಕಾ ರಂಗಕ್ಕೆ ಬಂದಿದ್ದ ಲಂಕೇಶ್ರು ಇಂಗ್ಲೀಷ್ ಸಾಹಿತ್ಯದ ಆಳ ಅಧ್ಯಯನ ಹೊಂದಿದ್ದರು. ಚಾಲ್ಸರ್್ ಬೋದಿಲೇರ್ನಂತರ ಅಪ್ರತಿಮ ಲೇಖಕರ ಸಂಕಲನಗಳನ್ನು ಬೆಚ್ಚಿಬೀಳಿಸುವ ರೀತಿಯಲ್ಲಿ ಅನುವಾದ ಮಾಡಿದ ಕೀತರ್ಿ ಲಂಕೇಶ್ರಿಗೆ ಸಲ್ಲುತ್ತದೆ ಎಂದರು. ಕಥೆ, ಕಾದಂಬರಿ, ನೀಲು ಪದ್ಯ, ಟೀಕೆ ಟಿಪ್ಪಣೆ, ಅನುವಾದದ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದ ಲಂಕೇಶ್ರು ಯುವ ಸಾಹಿತಿಗಳನ್ನು ರೂಪಿಸಿದರು. ಚಲನ ಶೀಲತೆಗೆ ಹೆಸರಾಗಿದ್ದ ಲಂಕೇಶ್ ಕೊನೆಯುಸಿರೆಳೆಯುವ ಮದ್ಯರಾತ್ರಿ ನೀಲು ಪದ್ಯವನ್ನು ಬರೆದು ಪುಸ್ತಕ ಓದುತ್ತಲೇ ಚಿರನಿದ್ರೆಗೆ ಜಾರಿದ್ದರು. ಇದನ್ನು ಗಮನಿಸಿದರೆ ಅವರಲ್ಲಿನ ಓದುಗ ಎಷ್ಟು ಕ್ರೀಯಾಶೀಲ ಮತ್ತು ಓದಿನ ಬಗ್ಗೆ ಅವರಲ್ಲಿನ ದಾಹ ಎಂತಹದ್ದು ಎಂದು ಗೊತ್ತಾಗುತ್ತದೆ. ಅವರಂತಹ ದಿಟ್ಟ, ಸಾಹಸಿ ಪತ್ರಕರ್ತ ಸಿಗುವುದು ತುಂಬಾ ವಿರಳ ಎಂದು ಹೇಳಿದರು. ಅನಿಕೇತನ ಕಾಲೇಜಿನ ಪ್ರಾಚಾರ್ಯ ಬಸವರಾಜ ಯಲಬುಗರ್ಿ ಮಾತನಾಡಿ ಎಪ್ಪತ್ತರ ದಶಕದಿಂದಲೂ ಲಂಕೇಶ್ರು ಪತ್ರಿಕಾ ರಂಗದಲ್ಲಿ ಮಾಡಿದ ಕ್ರಾಂತಿ ಅಷ್ಟಿಷ್ಟಲ್ಲ. ವಿರೋಧ ಪಕ್ಷಕ್ಕಿಂತಲೂ ಲಂಕೇಶ್ರ ಬಗ್ಗೆಯೇ ಹೆಚ್ಚಿನ ಭಯವನ್ನು ಅಂದಿನ ಸಕರ್ಾರಗಳು ಹೊಂದಿದ್ದವು. ಇದನ್ನು ಗಮನಿಸಿದರೆ ಲಂಕೇಶ್ರಲ್ಲಿ ಎಂತಹ ಶಕ್ತಿ ಅಡಗಿತ್ತು ಎನ್ನುವುದು ಅರ್ಥವಾಗುತ್ತದೆ ಎಂದು ಹೇಳಿದರು. ಪ್ರೌಢಶಾಲಾ ಶಿಕ್ಷಕ ಬೀರಪ್ಪ ಶಂಭೋಜಿ ಮಾತನಾಡಿ ಲಂಕೇಶ್ರಿಗೆ ಲಂಕೇಶರೇ ಸಾಟಿ. ಅವರ ಜನ್ಮ ದಿನಾಚರಣೆಯನ್ನು ಸಿಂಧನೂರಿನಂತಹ ನಗರದಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿ ಲಂಕೇಶ್ರ ಕುರಿತು ರಚಿಸಿದ ಚುಟುಕುಗಳನ್ನು ವಾಚಿಸಿದರು. ಕಾಮರ್ಿಕ ಮುಖಂಡ ವೆಂಕನಗೌಡ ಗದ್ರಟಗಿ ಮಾತನಾಡಿ ಎಂಬತ್ತರ ದಶಕದಲ್ಲಿ ಲಂಕೇಶ್ ಪತ್ರಿಕೆಯದೇ ಸುದ್ದಿ. ಜನಸಾಮಾನ್ಯರಿಂದಿಡಿದು ರಾಜಕಾರಣಿಗಳು ಲಂಕೇಶ್ ಪತ್ರಿಕೆಯಲ್ಲಿ ಈ ಭಾರಿ ಯಾರದು ಗದ್ದಲ ಎನ್ನುವಂತೆ ನೋಡುತ್ತಿದ್ದರು. ಭ್ರಷ್ಟ ವ್ಯವಸ್ಥೆಯ ಹಾಗೂ ರಾಜಕಾರಣಿ ಮತ್ತು ಅಧಿಕಾರಿಗಳ ವಿರುದ್ದ ಸಮರ ಸಾರಿದ್ದ ಲಂಕೇಶ್ ಲೇಖನಿಯನ್ನು ಖಡ್ಗವಾಗಿ ಬಳಸಿದರು ಎಂದು ಹೇಳಿದರು. ಕೊಟ್ರೇಶ.ಬಿ., ರಾಮಣ್ಣ ಹಿರೇಭೇರಗಿ, ಖಲೀಲ್, ಚಂದ್ರಶೇಖರ ಬೆನ್ನೂರು, ಬಸವರಾಜ ಹಳ್ಳಿ ಹಸಮಕಲ್, ಹನುಮಂತಪ್ಪ ಗೂಳಿ, ಶಿವನಗೌಡ, ಷರೀಫ್ ಹಸಮಕಲ್, ಕೊಟ್ರೇಶ.ವೈ.ಎಂ ಮತ್ತಿತರರು ಕವನ ವಾಚಿಸಿದರು. ರಾಮಣ್ಣ ಹಿರೇಬೇರಿಗಿ ಕವಿಗಳ ಕವನ ಕುರಿತು ಮಾತನಾಡಿದರು. ಲಂಕೇಶ್ ಭಾವಚಿತ್ರಕ್ಕೆ ಹೂವಿನ ಮಾಲೆ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕೊಟ್ರೇಶ.ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಸೇನಬಾಷಾ ನಿರೂಪಿಸಿದರು. ಬಸವರಾಜ ಬಾದಲರ್ಿ ವಂದಿಸಿದರು. ಉಪನ್ಯಾಸಕರಾದ ಹುಡಸಪ್ಪ ಹುಡಸೂರು, ಕಾಳಿಂಗರೆಡ್ಡಿ, ನಾರಾಯಣ ಬೆಳಗುಕರ್ಿ, ವೀರೇಶ ನಾಯಕ, ಹುಸೇನಪ್ಪ ಅಮರಾಪುರ, ಎಂ.ಭಾಸ್ಕರ್, ಇಮಾಮ್ ಹುಸೇನ್ ಎತ್ಮಾರಿ ಮತ್ತಿತರರು ಇದ್ದರು.
- ಬಸವರಾಜ ಹಳ್ಳಿ , ಹಸಮಕಲ್

ಹೀಗೆ ಹುಟ್ಟಿತು ಲಂಕೇಶ್ ಬಳಗ

ಸಿಂಧನೂರಿನಂತಹ ನಗರದಲ್ಲಿ ಸಾಹಿತ್ಯಿಕ ವಾತಾವರಣ ಸೃಷ್ಟಿ ಮಾಡಬೇಕೆನ್ನುವುದು ನನ್ನ ಬಹು ದಿನದ ಕನಸು. ಹಲವು ಬಾರಿ ಇದಕ್ಕೆ ವಿಫಲ ಯತ್ನ ನಡೆಸಿ ಸುಮ್ಮನಾಗಿದ್ದುಂಟು. ಮಾಚರ್್ 2ರಂದು ಹೊಟೇಲ್ವೊಂದರಲ್ಲಿ ಟೀ ಹೀರುತ್ತಾ ಕುಳಿತಿದ್ದ ಸಂದರ್ಭದಲ್ಲಿ ವೃತ್ತಿಯಲ್ಲಿ ಶಿಕ್ಷಕರಾಗಿರುವ ಗೆಳೆಯ ಕೊಟ್ರೇಶ.ಬಿ. ಕವಿಗೋಷ್ಠಿ ಬಗ್ಗೆ ಮಾತೆತ್ತಿದರು. ಹಾಗೆ ಹೀಗೆ ಮಾತನಾಡುತ್ತಾ ಏನಾದರೂ ಆಗಲಿ ಈ ಬಾರಿ ಕವಿಗೋಷ್ಠಿ ನಡಿಸಿಯೇ ಬಿಡೋಣ ಎನ್ನುವ ತೀಮರ್ಾನಕ್ಕೆ ಇಬ್ಬರು ಬಂದೆವು. ಆವಾಗ ನಮ್ಮಲ್ಲಿ ಉದಯಿಸಿದ್ದೇ ಲಂಕೇಶ್ ಬಳಗ. ಲಂಕೇಶ್ರ ಕುರಿತು ಆಳ ಅಧ್ಯಯನವಿರುವ ಸಿಂಧನೂರಿನ ಸಕರ್ಾರಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಹಾಗೂ ಸಹೃದಯ ಕವಿ ನಾಗಣ್ಣ ಕಿಲಾರಿಯವರನ್ನು ದೂರವಾಣಿಯಲ್ಲಿ ಸಂಪಕರ್ಿಸಿ ವಿಷಯ ತಿಳಿಸಿದಾಗ ಅವರು ಲಂಕೇಶ್ರ ಕುರಿತು ಮಾತನಾಡಲು ಒಪ್ಪಿಕೊಂಡರು. ನಮಗೆ ಮತ್ತಷ್ಟು ಧೈರ್ಯ ಬಂತು. ಪತ್ರಿಕೆಗಳಲ್ಲಿ ಲಂಕೇಶ್ ಬಳಗದಿಂದ ಮಾ.6ರಂದು ಅನಿಕೇತನ ಕಾಲೇಜಿನಲ್ಲಿ ಕವಿಗೋಷ್ಠಿ ಹಾಗೂ ಲಂಕೇಶ್ರ 76 ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದೆವು. ಆವತ್ತು ಭಾರತ ಮತ್ತು ಐರ್ಲಂಡ್ ಕ್ರಿಕೆಟ್ ಪಂದ್ಯ ಹಾಗೂ ಪತ್ರಕರ್ತರೊಬ್ಬರ ವಿವಾಹ ಕಾರ್ಯಕ್ರಮದಿಂದ ಕವಿಗೋಷ್ಠಿ ಸಮಯವನ್ನು ಬೆಳಿಗ್ಗೆ 10 ಗಂಟೆಗೆ ಬದಲಾಯಿಸಲಾಯಿತು.
ಮಾಚರ್್ 5ರ ಶನಿವಾರ ಸಾಯಂಕಾಲದಿಂದ ಲಂಕೇಶ್ ಸಾಹಿತ್ಯಾಭಿಮಾನಿಗಳಿಗೆ, ಆಪ್ತರಿಗೆ ಕಾರ್ಯಕ್ರಮಕ್ಕೆ ಬರುವಂತೆ ಕೋರಿ ನಂತರ ರಾತ್ರಿ 9 ಗಂಟೆಗೆ ಲಂಕೇಶ್ ಬಳಗದ ಬ್ಯಾನರ್ ಹಾಕಿಸಲು ಗೆಳೆಯ ಇಮಾಮ್ ಹುಸೇನ್ಗೆ ಹೇಳಿ, ನಾಗಣ್ಣ ಕಿಲಾರಿ ಅವರ ರೂಂಗೆ ಕಾರ್ಯಕ್ರಮದ ರೂಪುರೇಷೆ ಕುರಿತು ಚಚರ್ಿಸಲು ನಾನು ಕೊಟ್ರೇಶ.ಬಿ, ಸಹೋದರರಾದ ಖಲೀಲ್, ಹುಸೇನ್ ಹೋದೆವು. ರಾತ್ರಿ 11 ಗಂಟೆಯವರೆಗೂ ಕಾರ್ಯಕ್ರಮದ ಬಗ್ಗೆ ಚಚರ್ಿಸಿ ಬಂದೆವು. ಆ ನಂತರ ಕೋಟ್ರೇಶ.ಬಿ. ನಾನು ಮೂರ್ನಾಲ್ಕು ದಿನದಲ್ಲೇ ಕಾರ್ಯಕ್ರಮ ನಡೆಸಲು ಮುಂದಾಗಿದ್ದೇವೆ ಹೇಗಾಗುತ್ತೋ ಏನೋ ಎಂದು ಆತಂಕದಿಂದ ಚಚರ್ಿಸಿದೆವಾದರೂ, ಬಂದಷ್ಟು ಗೆಳೆಯರು ಬರಲಿ ಎಂದು ಸುಮ್ಮನಾದೆವು. ಬೆಳಿಗ್ಗೆ 9 ಗಂಟೆಗೆ ಅನಿಕೇತನ ಕಾಲೇಜಿನ ತರಗತಿ ಕೊಠಡಿಯಲ್ಲಿ ಬ್ಯಾನರ್ ಕಟ್ಟಿ ಎಲ್ಲ ಅಣಿಗೊಳಿಸಿದೆವು. ನಾಗಣ್ಣ ಕಿಲಾರಿಯವರು ಬಂದರು. ಅಷ್ಟರಲ್ಲಿ ಚುಸಾಪ ಜಿಲ್ಲಾಧ್ಯಕ್ಷ ಬೀರಪ್ಪ ಶಂಭೋಜಿ, ಕಾಮರ್ಿಕ ಮುಖಂಡ ವೆಂಕನಗೌಡ ಗದ್ರಟಗಿ ಅವರು ಬಂದಿದ್ದರು. 10 ಗಂಟೆ ಮೀರುತ್ತಾ ಬಂದರೂ ಏಳೆಂಟು ಜನರು ಮಾತ್ರ ಇದ್ದೆವು. ಇದರಿಂದ ಕಾರ್ಯಕ್ರಮ ಹೇಗಾಗುತ್ತೋ ಎಂದು ಆತಂಕಗೊಂಡಿದ್ದೆವು. ಆನಂತರ ಬಿ.ಸಿ.ಎಂ.ಹಾಸ್ಟೆಲ್ನ ವಿದ್ಯಾಥರ್ಿಗಳು, ವಿದ್ಯಾಥರ್ಿನಿಯರು ಸೇರಿದಂತೆ ಶಿಕ್ಷಕ ಬಳಗ ನಮ್ಮ ಮಿತ್ರರು ಬಂದರು. ಖಾಲಿ ಖಾಲಿ ಹೊಡೆಯುತ್ತಿದ್ದ ಕೊಠಡಿಯಲ್ಲಿ ಕೊನೆಗೆ ಕೂಡಲು ಜಾಗವಿಲ್ಲದೆ ಕೆಲವರು ಹೊರಗಡೆ ನಿಲ್ಲುವಂತಾಯಿತು. ಆವಾಗ ಲಂಕೇಶ್ ಬಳಗ ಎಷ್ದು ದೊಡ್ಡದಿದೆ ಎಂದು ತಿಳಿಯಿತು. ಕಾರ್ಯಕ್ರಮ ಮುಗಿದ ನಂತರ ಟಿ ಬಿಸ್ಕಿಟ್ಗೆ ವ್ಯವಸ್ಥೆ ಮಾಡಿದ್ದೆವು. ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರೂ ಲಂಕೇಶ್ ಬಳಗದ ಕವಿಗೋಷ್ಠಿ ಮೂಲಕ ತಮ್ಮ ಬಹು ದಿನದ ಕವಿತೆ ಓದುವ ಕನಸನ್ನು ಈಡೇರಿಸಿದ್ದಕ್ಕೆ ಧನ್ಯವಾದ ಹೇಳಿದರು. ಅವರು ಧನ್ಯವಾದ ಹೇಳುತ್ತಿದ್ದಂತೆ ನಮ್ಮಲ್ಲಿ ಲಂಕೇಶ್ ಆಳವಾಗಿ ಬೇರೂರಿದರು.
ಲಂಕೇಶ್ ಬಳಗ ಜನ್ಮ ತಳೆಯಲು ಗೆಳೆಯರಾದ ಇಮಾಮ್ ಹುಸೇನ್ ಎತ್ಮಾರಿ, ಕೊಟ್ರೇಶ.ಬಿ, ಸಹೋದರರಾದ ಖಲೀಲ್, ಹುಸೇನಬಾಷಾ, ಉಪನ್ಯಾಸಕರಾದ ಡಿ.ಎಚ್.ಕಂಬಳಿ, ನಾಗಣ್ಣ ಕಿಲಾರಿ, ಯಮನಪ್ಪ ಪವಾರ್ ಅವರ ಸಹಕಾರ ಸ್ಮರಣೀಯ.
- ಬಸವರಾಜ ಹಳ್ಳಿ, ಹಸಮಕಲ್

ಮಂಗಳವಾರ, ಮಾರ್ಚ್ 15, 2011

ಕಗ್ಗಾಡಿನ ಬೇಡರ ಮೋನಿ
ತೀರಿಕೊಂಡಾಗ
ಪತ್ರಿಕೆಗಳ ವಿಷಾದಕ್ಕೆ ಬದಲು
ಸೇವಂತಿ ದುಃಖದಿಂದ ದಳ ಉದುರಿಸಿತು.


ಮೋಕ್ಷವೆಂದರೆ ಎಲ್ಲ ಸುಖ ದುಃಖಗಳಿಂದ ಬಿಡುಗಡೆಎಂದು
ಪಂಡಿತರು ಹೇಳಿದ್ದು ಕೇಳಿದೊಡನೆ
ಮೋಕ್ಷದಿಂದ ತಪ್ಪಿಸಿಕೊಳ್ಳಲು
ಆತ ಪಾಪಗಳನ್ನು ಮಾಡಲು ಓಡಿದ - ಪಿ.ಲಂಕೇಶ್