ಭಾನುವಾರ, ಅಕ್ಟೋಬರ್ 16, 2011

ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಕವನ ಸ್ಪಧರ್ೆ -2011 : ಬಸವರಾಜ ಹೃತ್ಸಾಕ್ಷಿ ಸಿರಿವಾರ, ಆರೀಫ್ ರಾಜಾಗೆ ಬಹುಮಾನ



ಸಹೃದಯ ಕವಿ ಬಸವರಾಜ ಹೃತ್ಸಾಕ್ಷಿ ಸಿರವಾರ ಅವರ
' ಒಬ್ಬ ಅವ್ವ ಇರಲಿ, ಈ ಬಿಸಿಲ ಕೂಸುಗಳಿಗೆ' ಕವನ ಈ ಬಾರಿಯ ಪ್ರತಿಷ್ಠಿತ ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಕವನ ಸ್ಪಧರ್ೆಯಲ್ಲಿ (2011) ಪ್ರಥಮ ಬಹುಮಾನ ಪಡೆದಿದೆ. ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಸಿರವಾರದಲ್ಲಿ ಬಸವರಾಜ ಹೃತ್ಸಾಕ್ಷಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನೂ ಎರಡನೇ ಬಹುಮಾನ ಆರೀಫ್ ರಾಜಾ ಅವರ " ಬುಖರ್ಾ ಹೌಸಿನ ಮುಂದೆ' ಕವನಕ್ಕೆ ದೊರೆತಿದೆ. ಈ ಬಾರಿ ಪ್ರಥಮ ಮತ್ತು ದ್ವಿತೀಯ ಬಹುಮಾನ ರಾಯಚೂರು ಜಿಲ್ಲೆಗೆ ದಕ್ಕಿರುವುದು ವಿಶೇಷ. ಈ ಹಿಂದೆಯೇ ಆರೀಫ್ ರಾಜಾ ಅವರ ಕವನ "ಜಂಗಮ ಪಕೀರನ ಜೋಳಿಗೆ'ಗೆ ಪ್ರಥಮ ಸ್ಥಾನ ದೊರೆತಿದ್ದನ್ನು ನಾವು ಸ್ಮರಿಸಬಹುದು.
ಕಾವ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗದೊಂದಿಗೆ ಜಿಲ್ಲೆಯ ಕೀತರ್ಿಯನ್ನು ಹೆಚ್ಚಿಸಿರುವ ಬಸವರಾಜ ಹೃತ್ಸಾಕ್ಷಿ ಸಿರವಾರ ಹಾಗೂ ಆರೀಫ್ ರಾಜಾ ಅವರಿಗೆ
ಹೃದಯಪೂರ್ವಕ ಅಭಿನಂದನೆಗಳು.
- ಪಿ.ಲಂಕೇಶ್ ಬಳಗ, ಸಿಂಧನೂರು (9880757380)

ಮಂಗಳವಾರ, ಅಕ್ಟೋಬರ್ 4, 2011



ಸಂಚಾಲಕ ಕೊಟ್ರೇಶ.ಬಿ.ಮಾತನಾಡುತ್ತಿರುವುದು.


ಲಂಕೇಶ್ ಮತ್ತೆ ಮತ್ತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಹಿತ್ಯಾಸಕ್ತರು ಹಾಗೂ ಲಂಕೇಶರ ಅಭಿಮಾನಿಗಳು.

ಕವಿ ನಾಗಣ್ಣ ಕಿಲಾರಿ ಮಾತನಾಡುತ್ತಿರುವುದು.

'ಲಂಕೇಶ್ ಮತ್ತೆ ಮತ್ತೆ' ಕಾರ್ಯಕ್ರಮದ ಭಾವ ಚಿತ್ರಗಳು...

ುಲ್ವರ್ಗ ವಿಶ್ವವಿದ್ಯಾಲಯಕ್ಕೆ ಬಿ.ಎಸ್.ಸಿ. ವಿಭಾಗದಲ್ಲಿ ಎರಡನೇ ರ್ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾಥರ್ಿ ಹುಸೇನ್ಭಾಷಾ ಅವರನ್ನು ಪಿ.ಲಂಕೇಶ್ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು.

ಲಂಕೇಶ್ರನ್ನು ಕನವರಿಸುತ್ತಾ...


ನೀಲು
ಮೊಟ್ಟೆ ಇಲ್ಲವಾಗಿ, ಮರಿ ಬೆಳೆದು
ಹಾಡಿ
ಎಲ್ಲೋ ಹಾರಿ ಹೋದ ಮೇಲೆ
ತೂಗಾಡುವ ಖಾಲಿ ಗೂಡಿನ
ದುಗುಡವ ಬಲ್ಲೆಯಾದರೆ
ಪ್ರೇಮವಿಲ್ಲದ ಎದೆಯ ಅರಿತಿರುವೆ
- ಪಿ.ಲಂಕೇಶ್

ಮಾಚರ್್ 6, 2011ರ ನಂತರ, ಲಂಕೇಶ್ರ ಕುರಿತು ಮತ್ತೊಂದು ಕಾರ್ಯಕ್ರಮ ಮಾಡುವ ಬಗ್ಗೆ ಗೆಳೆಯರೆಲ್ಲಾ ಚಚರ್ಿಸಿದೆವು. ಸೆಪ್ಟೆಂಬರ್ 25, 2011 ರಂದು ಭಾನುವಾರ ಕಾರ್ಯಕ್ರಮ ನಿಕ್ಕಿಯಾಯಿತು. ಈಗಾಗಲೇ ಮೊದಲು ಕಾಲೇಜ್ವೊಂದರಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲಂಕೇಶ್ ಅಭಿಮಾನಿಗಳು ಹಾಗೂ ಅವರ ಸಾಹಿತ್ಯದ ಬಗ್ಗೆ ಒಲವಿರುವ ಸಹೃದಯ ಮನಸ್ಸುಗಳನ್ನು ಕಂಡುಕೊಂಡಿದ್ದ ನಾವು ಇನ್ನೂ ಚೆನ್ನಾಗಿಯೇ ಕಾರ್ಯಕ್ರಮ ಆಯೋಜಿಸಬೇಕೆಂಬ ತುಡಿತದೊಂದಿಗೆ ಕಾರ್ಯಪ್ರವೃತ್ತರಾದೆವು. ನಮ್ಮ ಆಹ್ವಾನಕ್ಕೆ ಲಂಕೇಶ್ರ ಜೊತೆಗೆ ಹಲವು ವರ್ಷಗಳಿದ್ದು ಅವರ ಒಡನಾಟ ಬಲ್ಲ ಗಂಗಾಧರ ಕುಷ್ಟಗಿ ಕಾರ್ಯಕ್ರಮಕ್ಕೆ ಬರಲು ಒಪ್ಪಿದರು. ಜನಪರ ಕಾಳಜಿಯ ಕವಿಗಳಾದ ಪೀರಬಾಷಾ ಹಾಗೂ ಕಾವ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಸಹೃದಯ ಕವಿಗಳಾದ ಆರೀಫ್ ರಾಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಿ.ಲಂಕೇಶ್ ಬಳಗದ ಕಾರ್ಯಕ್ರಮಕ್ಕೆ ಬೆನ್ನುತಟ್ಟಿದ್ದಲ್ಲದೆ ಹೊಸ ಐಡಿಯಾಗಳನ್ನು ನೀಡುವ ಮೂಲಕ ಮತ್ತಷ್ಟು ನಮ್ಮನ್ನು ಉತ್ತೇಜಿಸಿದರು. ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಭಾಗವಹಿಸಿ ಶೋಭೆ ತಂದರು. ಕಾರ್ಯಕ್ರಮ ಮುಗಿದ ನಂತರ ಅನೇಕ ಯುವ ಮನಸ್ಸುಗಳು ಈ ಕಾರ್ಯಕ್ರಮದ ಮೂಲಕ ವೇದಿಕೆ ಕಲ್ಪಿಸಿದ್ದಕ್ಕೆ ಧನ್ಯವಾದ ಅಪರ್ಿಸಿದಾಗ. ನಮ್ಮ ಬಳಗ ಲಂಕೇಶ್ರನ್ನು ಕನವರಿಸುತ್ತಿರುವುದು ಸಾರ್ಥಕವೆನಿಸಿತು. ಕಾರ್ಯಕ್ರಮ ಆಯೋಜಿಸಲು ನಮಗೆಲ್ಲಾ ಮಾರ್ಗದರ್ಶಕರಾದ ಸಹೃದಯಿ ಕವಿಗಳಾದ ನಾಗಣ್ಣ ಕಿಲಾರಿ, ಡಿ.ಎಚ್.ಕಂಬಳಿ ಮತ್ತವರ ಪ್ರೋತ್ಸಾಹಕ್ಕೆ ಧನ್ಯವಾದ.
-ಬಸವರಾಜ ಹಳ್ಳಿ, ಹಸಮಕಲ್