ಮಂಗಳವಾರ, ಅಕ್ಟೋಬರ್ 4, 2011

ಲಂಕೇಶ್ರನ್ನು ಕನವರಿಸುತ್ತಾ...


ನೀಲು
ಮೊಟ್ಟೆ ಇಲ್ಲವಾಗಿ, ಮರಿ ಬೆಳೆದು
ಹಾಡಿ
ಎಲ್ಲೋ ಹಾರಿ ಹೋದ ಮೇಲೆ
ತೂಗಾಡುವ ಖಾಲಿ ಗೂಡಿನ
ದುಗುಡವ ಬಲ್ಲೆಯಾದರೆ
ಪ್ರೇಮವಿಲ್ಲದ ಎದೆಯ ಅರಿತಿರುವೆ
- ಪಿ.ಲಂಕೇಶ್

ಮಾಚರ್್ 6, 2011ರ ನಂತರ, ಲಂಕೇಶ್ರ ಕುರಿತು ಮತ್ತೊಂದು ಕಾರ್ಯಕ್ರಮ ಮಾಡುವ ಬಗ್ಗೆ ಗೆಳೆಯರೆಲ್ಲಾ ಚಚರ್ಿಸಿದೆವು. ಸೆಪ್ಟೆಂಬರ್ 25, 2011 ರಂದು ಭಾನುವಾರ ಕಾರ್ಯಕ್ರಮ ನಿಕ್ಕಿಯಾಯಿತು. ಈಗಾಗಲೇ ಮೊದಲು ಕಾಲೇಜ್ವೊಂದರಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲಂಕೇಶ್ ಅಭಿಮಾನಿಗಳು ಹಾಗೂ ಅವರ ಸಾಹಿತ್ಯದ ಬಗ್ಗೆ ಒಲವಿರುವ ಸಹೃದಯ ಮನಸ್ಸುಗಳನ್ನು ಕಂಡುಕೊಂಡಿದ್ದ ನಾವು ಇನ್ನೂ ಚೆನ್ನಾಗಿಯೇ ಕಾರ್ಯಕ್ರಮ ಆಯೋಜಿಸಬೇಕೆಂಬ ತುಡಿತದೊಂದಿಗೆ ಕಾರ್ಯಪ್ರವೃತ್ತರಾದೆವು. ನಮ್ಮ ಆಹ್ವಾನಕ್ಕೆ ಲಂಕೇಶ್ರ ಜೊತೆಗೆ ಹಲವು ವರ್ಷಗಳಿದ್ದು ಅವರ ಒಡನಾಟ ಬಲ್ಲ ಗಂಗಾಧರ ಕುಷ್ಟಗಿ ಕಾರ್ಯಕ್ರಮಕ್ಕೆ ಬರಲು ಒಪ್ಪಿದರು. ಜನಪರ ಕಾಳಜಿಯ ಕವಿಗಳಾದ ಪೀರಬಾಷಾ ಹಾಗೂ ಕಾವ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಸಹೃದಯ ಕವಿಗಳಾದ ಆರೀಫ್ ರಾಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಿ.ಲಂಕೇಶ್ ಬಳಗದ ಕಾರ್ಯಕ್ರಮಕ್ಕೆ ಬೆನ್ನುತಟ್ಟಿದ್ದಲ್ಲದೆ ಹೊಸ ಐಡಿಯಾಗಳನ್ನು ನೀಡುವ ಮೂಲಕ ಮತ್ತಷ್ಟು ನಮ್ಮನ್ನು ಉತ್ತೇಜಿಸಿದರು. ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಭಾಗವಹಿಸಿ ಶೋಭೆ ತಂದರು. ಕಾರ್ಯಕ್ರಮ ಮುಗಿದ ನಂತರ ಅನೇಕ ಯುವ ಮನಸ್ಸುಗಳು ಈ ಕಾರ್ಯಕ್ರಮದ ಮೂಲಕ ವೇದಿಕೆ ಕಲ್ಪಿಸಿದ್ದಕ್ಕೆ ಧನ್ಯವಾದ ಅಪರ್ಿಸಿದಾಗ. ನಮ್ಮ ಬಳಗ ಲಂಕೇಶ್ರನ್ನು ಕನವರಿಸುತ್ತಿರುವುದು ಸಾರ್ಥಕವೆನಿಸಿತು. ಕಾರ್ಯಕ್ರಮ ಆಯೋಜಿಸಲು ನಮಗೆಲ್ಲಾ ಮಾರ್ಗದರ್ಶಕರಾದ ಸಹೃದಯಿ ಕವಿಗಳಾದ ನಾಗಣ್ಣ ಕಿಲಾರಿ, ಡಿ.ಎಚ್.ಕಂಬಳಿ ಮತ್ತವರ ಪ್ರೋತ್ಸಾಹಕ್ಕೆ ಧನ್ಯವಾದ.
-ಬಸವರಾಜ ಹಳ್ಳಿ, ಹಸಮಕಲ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ